Menu Close

ಗಣೇಶ ಹಬ್ಬದ ಅಂಗವಾಗಿ ವಿಜಯಪುರ ನಗರದ ಚಿಂತನಾ ಹಾಲ್‌‌ನಲ್ಲಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸೋನವಾನಿ ಭಗವಾನ್ ನೇತೃತ್ವದಲ್ಲಿ ಶಾಂತಿ ಸಭೆ.

ಗಣೇಶ ಹಬ್ಬದ ಅಂಗವಾಗಿ
ವಿಜಯಪುರ ನಗರದ ಚಿಂತನಾ ಹಾಲ್‌‌ನಲ್ಲಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸೋನವಾನಿ ಭಗವಾನ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು. ಇನ್ನು ಸಭೆಯಲ್ಲಿ ಹಿಂದೂ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದು, ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸುವಂತೆ ಎಸ್ಪಿ ಭಗವಾನ್ ಹೇಳಿದರು. ಅಲ್ಲದೇ, ಎಲ್ಲರೂ ಕಾನೂನಿನ ನಿಯಮಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.